Monday, January 22, 2007

Posted by ಬಡಗಿ | 0 comments

ಸಂಚಾರಿ ಅ-ರಕ್ಷಕಕ


ಇಂದು ಬನ್ನೇರುಘಟ್ಟ ರಸ್ತೆಯಲ್ಲಿ ಒಬ್ಬ ಲಾರಿ ಚಾಲಕನಿಗೆ ಸಂಚಾರಿ ಆರಕ್ಷಕ ಅಧಿಕಾರಿ ತನ್ನ ಶಿರಸ್ತ್ರಾಣದಿಂದ ಹೊಡೆಯುತ್ತಿದ್ದುದಕ್ಕೆ ಮೂಖ ಸಾಕ್ಷಿಯಾಗಿ ನಿಂತಿದ್ದೆ. ತನ್ನ ಷೂವನ್ನು ಬಿಚ್ಚಿ ಹೊಡೆಯಲು ಹೊರಟಿದ್ದ ಆ ಅಧಿಕಾರಿ. ಫ್ಲೈಓವರ್‍ ಗಳಿರುವುದರಿಂದ ಬೇಗ ಕೆಲಸ ತಲುಪಬಹುದೆಂಬ ಆಶಯದಿಂದ ಬನ್ನೇರುಘಟ್ಟ ರಸ್ತೆ ಮೂಲಕ ಪಯಣಿಸಿದ ನಾನು ಈ ಒಂದು ಘಟನೆ ಮನ ಕಲಕಿತು. ಲಾರಿ ಚಾಲಕ ತಪ್ಪೇ… ಇಲ್ಲ ಅನಿಸಿತು. ಆತ ಲಾರಿಯನ್ನು ಈ ರಸ್ತೆಗೆ ಕಲ್ಲುಗಳನ್ನು ಹೊತ್ತು ತಂದಿದ್ದ. ಈ ರಸ್ತೆಯಲ್ಲಿರುವ ಕಲ್ಲಿನಂಗಡಿಗಾಗಿ. ರಸ್ತೆ ಚಿಕ್ಕದಿದ್ದರಿಂದ ವಾಹನ ತಿರುಗಿಸಲು ಕಷ್ಟವಾಗಿತ್ತು. ಆತ ಶ್ರಮ ಪಟ್ಟು ತಿರುಗಿಸುವಷ್ಟರಲ್ಲಿ ಇತರೆ ವಾಹನಗಳು ತಾಳ್ಮೆ ಕಳೆದುಕೊಂಡು ಹಿಂದೆ ಮುಂದೆ ನುಗ್ಗಿ ಅವನಿಗೆ ಇನ್ನಷ್ಟು ತೊಂದರೆ ಕೊಟ್ಟಿದ್ದವು. ಲಾರಿ ತಿರುಗಿಸಲಾಗದೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಆರಕ್ಷಕರಿಗೆ ಕೈ ಬೆಚ್ಚಗೆ ಮಾಡಿದ್ದರೆ ಸುಮ್ಮನೆ ಇರುತ್ತಾರೆ. ಎಷ್ಟೋ ಸಲ ಜಯಚಾಮರಾಜೇಂದ್ರ ರಸ್ತೆಯಿಂದ ಪೂರ್ಣಿಮಾ ಚಿತ್ರಮಂದಿರದ ರಸ್ತೆಕಡೆಗೆ ಲಾರಿ ನಿಷಿದ್ಧ ಇದ್ದರೂ ಈ ಆರಕ್ಷಕರೆ ಮಾಮೂಲು ತೆಗೆದುಕೊಂಡು ಲಾರಿಗಳನ್ನು ಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ರಸ್ತೆ ದಾಟುತ್ತಿದ್ದ ತರುಣಿ ಸುಮ್ಮನಿದ್ದವಳು ಇದ್ದಕ್ಕಿದಂತೆ ಚಲಿಸಿ ನನ್ನ ವಾಹನದ ಚಕ್ರಕ್ಕೆ ತನ್ನ ಅಂಗಾಲನ್ನು ಸಿಕ್ಕಿಸಿದ್ದಳು. ನನ್ನ ದುರಾದೃಷ್ಟಕ್ಕೆ ಅಲ್ಲೇ ಮುಂದೆ ಸಂಚಾರಿ ಆರಕ್ಷಕ ವಾಹನವನ್ನು ಅತೀರೇಕವಾಗಿ ಓಡಿಸುತ್ತಿದ್ದೇನೆಂದು, ಲೈಸ್ಸೆನ್ಸನ್ನು ಕಸಿದುಕೊಂಡರು. ಇದು ನನ್ನ ತಪ್ಪಲ್ಲವೆಂದು, ವಾಹನ ಅತೀ ನಿಧಾನವಾಗಿ ಚಲಿಸುತ್ತಿದ್ದೆನೆಂದು ಹೇಳಿದರೂ ಒಪ್ಪದೇ ಇದ್ದಾಗ ನೂರು ರೂಪಾಯಿಗಳನ್ನು ಅವರ ಛೇಲ(ಮುಫ್ತಿಯಲ್ಲಿರುವ ಸಹದ್ಯೋಗಿಯೇ?)ನಿಗೆ ಕೊಟ್ಟು ಲೈಸ್ಸೆನ್ಸ ಬಿಡಿಸಿಕೊಂಡೆ.

0 comments: