ಕನ್ನಡಿಗರಿಗೆ ಕನ್ನಡಿಗರಿಂದ ಕೆಲಸ!
ಇತ್ತೀಚೆಗೆ ನನ್ನ ಮೊಬೈಲ್ಗೆ ವಿವಿಧ ಸಂಸ್ಥೆಗಳಿಂದ ಜಾಹೀರಾತು ಕರೆಗಳು ಹೆಚ್ಚಾಗಿ ಬರಲಾರಂಭಿಸಿವೆ. ಅದರಲ್ಲೂ ಕರ್ನಾಟಕದಾಚೆಯಿಂದಲೂ ಕರೆಗಳು ಬರಲಾರಂಭಿಸಿವೆ. ಅವರಲ್ಲಿ ನಾನು ಕನ್ನಡದಲ್ಲಿ ಮಾತನಾಡಲು ಅವರು ಆಂಗ್ಲ, ಹಿಂದಿ, ತಮಿಳು, ತೆಲುಗು ಗೊತ್ತಾ ಎಂದು ಕೇಳುತ್ತಾರೆ. ಯಾಕೆ ಕನ್ನಡ ಬಲ್ಲವರು ಇವರಲ್ಲಿ ಇಲ್ಲವೇ? ಎಂದು ಯೋಚಿಸಿದಾಗ ಸಿಕ್ಕ ಉತ್ತರ ನಮ್ಮ ಉದಾರೀ ಬುದ್ಧಿ. ನಾವು ಅವರೊಡನೆ ಆಂಗ್ಲದಲ್ಲೋ, ಹಿಂದಿಯಲ್ಲೋ... ಮಾತನಾಡಿ, ಈ ಉದಾರ ಬುದ್ದಿಯಿಂದಲೇ ಒಬ್ಬ ಕನ್ನಡಿಗನಿಗೆ ನಾವು ಕೆಲಸದ ಅವಕಾಶ ತಪ್ಪಿಸುತ್ತಿದ್ದೇವೆ. ಆದ್ದರಿಂದ ದಯಮಾಡಿ ಇನ್ನು ಮುಂದೆ ಎಲ್ಲಾ ಜಾಹೀರಾತು ಕರೆಗಳಿಗೂ ಕನ್ನಡದಲ್ಲೇ ಉತ್ತರಿಸಿ ಕನ್ನಡಿಗನಿಗೆ ಕೆಲಸ ಕೊಡಿಸಬೇಕಾಗಿ ಕೋರಿಕೆ.
0 comments:
Post a Comment